ಸಮಾಜ ಸೇವಕ ಹರತಾಳು ಹಾಲಪ್ಪ

ಹರತಾಳು ಹಾಲಪ್ಪ ಆದ ನಾನು ನನ್ನ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿ.

ಬದುಕು ಕೊಡುವ ಭೂತಾಯಿ ಸಮೃದ್ಧ ಪೈರನ್ನು ಹೊತ್ತು, ತೆನೆ ಒಡೆಯುವ ಹಂತದಲ್ಲಿರುವಾಗ ಭೂಮಿತಾಯಿ ಗರ್ಭ ಧರಿಸಿದ್ದಾಳೆ ಎಂದು ಪರಿಗಣಿಸಿ ಅವಳಿಗೆ ಸೀಮಂತ ಮಾಡಿ ವಿಶೇಷ ಖಾದ್ಯಗಳ ನೈವೇದ್ಯ ಮಾಡಿ ಭೂತಾಯಿ ಮಡಿಲು ತುಂಬುವ ಅರ್ಥಪೂರ್ಣ ಆಚರಣೆಯೇ “ಭೂಮಿ ಹುಣ್ಣಿಮೆ”.
ನೇಗಿಲ ಯೋಗಿ ಇಡೀ ರಾತ್ರಿ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಭೂತಾಯಿಗೆ ಕೃತಜ್ಞನಾಗುವ ರೀತಿಯೇ ಅಭೂತಪೂರ್ವವಾದುದು. ತುಂಬಿದ ಬಸುರಿಯಾಗಿ ತನ್ನೊಳಗೆ ಹಸಿರು ಹೊದ್ದು ಕಂಗೊಳಿಸುವ ಭೂಮಿಗೆ ಉಣ್ಣಿಸುವ ಪರಿಯಲ್ಲಿರುವ ಉಪಕಾರ ಸ್ಮರಣೆಗೆ ಮತ್ತೊಂದು ಉದಾಹರಣೆಯನ್ನು ಬೇರಾವ ವಿಧದಲ್ಲೂ ನೋಡಲಸಾಧ್ಯ. ಭೂತಾಯಿ ಸಮೃದ್ಧ ಬೆಳೆಯನ್ನು ನೀಡಿ ಸಮಸ್ತ ರೈತ ಕುಲವನ್ನು ಸಂತೃಪ್ತಿಯಿಂದಿಡಲಿ.
ನಾಡಿನ ಸಮಸ್ತ ಜನತೆಗೆ ರೈತರ ಹೆಮ್ಮೆಯ ಹಬ್ಬ
“ಭೂಮಿ ಹುಣ್ಣಿಮೆಯ ಶುಭಾಶಯಗಳು”
ಪರಮ ಪವಿತ್ರವಾದ ರಾಮಾಯಣದ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ ಆದಿಕವಿ ವಾಲ್ಮೀಕಿ ಮಹರ್ಷಿಗಳ ಚರಣಗಳಿಗೆ ಶತ ಕೋಟಿ ನಮನಗಳು.
ನಾಡಿನ ಜನತೆಗೆ *”ಮಹರ್ಷಿ ವಾಲ್ಮೀಕಿ ಜಯಂತಿ” ಶುಭಾಶಯಗಳು.

ಸೇವಾ ಹಿ ಪರಮೋ ಧರ್ಮ:
ಸೇವೆ, ರಾಷ್ಟ್ರಭಕ್ತಿ, ವ್ಯಕ್ತಿ ನಿರ್ಮಾಣ, ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ವಿಜಯದಶಮಿ ಹಬ್ಬದಂದು ಸ್ಥಾಪನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಇಂದು ಜಗತ್ತಿನ ಅತಿ ದೊಡ್ಡ ಸಮಾಜಮುಖಿ ಸಂಘಟನೆಯಾಗಿ ಹೊರಹೊಮ್ಮಿದೆ, ಸರ್ವೇ ಜನ ಸುಖಿನೋ ಭವಂತು ಎಂಬಂತೆ ಕಾರ್ಯದಲ್ಲಿ ನಿರತವಾಗಿರುವ ಸಂಘದ ಎಲ್ಲ ಸ್ವಯಂಸೇವಕರಿಗೂ

“ರಾಷ್ಟ್ರೀಯ ಸ್ವಯಂ ಸೇವಕ ಸಂಘ” ದ ಸಂಸ್ಥಾಪನ ದಿನದ ಶುಭಾಶಯಗಳು.

ಗಣಪತಿ ಕೆರೆ ಅಭಿವೃದ್ಧಿಗೆ ಪಣ ತೊಟ್ಟ ಶಾಸಕ ಹಾಲಪ್ಪ

ಇದೇ ವೇದಿಕೆಯಲ್ಲಿ ನಾವು ಮಾತು ಕೊಟ್ಟಿದ್ವಿ..